Tuesday, October 22, 2013

ವೆಜಿಟೇಬಲ್ ಭಾತ್

ವೈಕುಂಠ ಏಕಾದಶಿ ಪ್ರಯುಕ್ತ ಒಂದು recipe


ಸರಿ ಇವತ್ತು ವೈಕುಂಠ ಏಕಾದಶಿ. ನಾವು ನೀರುಳ್ಳಿ ಬೆಳ್ಳುಳ್ಳಿ ಬಳಸಲ್ಲ (ಇದನ್ನೆ ಸುಮಾರು ಪೋಸ್ಟ್ ಗಳಲ್ಲಿ ಬರೆದಿದ್ದೇನೆ). ಮಾಲವಿಕ ’ಅಮ್ಮ, ಇವತ್ತು ರಜೆ (ಕೆಲಸಕ್ಕೆ) ಏನಾದರೂ ಸ್ಪೇಷಲ್ ಮಾಡು ಅಂದಾಗ, ಅದನ್ನೆ ಚಾಲೆಂಜ್ ಆಗಿಟ್ಟುಕೊಂಡು ಈ ರೈಸ್ ಐಟಮ್ ಪ್ರಾಯೋಗಿಕವಾಗಿ ಮಾಡಿದ್ದೇನೆ.
ಬೇಕಾಗುವ ಪದಾರ್ಥ:
ಪರಿಮಳದ ಅಕ್ಕಿ (ನಾನು ಬಾಸುಮತಿ ಅಕ್ಕಿಯನ್ನು ಬೆಳಗಾವಿಯಿಂದ ಹೊತ್ತು ತರುವುದು. ಅಲ್ಲಿನ ಸಂತೆಯಲ್ಲಿ ಲೋಕಲ್ ಬಾಸುಮತಿ ಅಂತ ಸಿಗುತ್ತೆ. 38 ರೂ/ಕೆ.ಜಿ (:-))
ಮಿಶ್ರ ತರಕಾರಿ ಒಂದು ಕಪ್ (ಕ್ಯಾರೆಟ್, ಬಟಾಣಿ (ಈಗ ಹೇಗೂ ಸೀಸನ್) ಕಾಲಿಫ್ಲವರ್, ಬೀನ್ಸ್) ಮೊದಲೆ ಬೇಯಿಸಿಡಿ
5 ಹಸಿಮೆಣಸಿನಕಾಯಿ, ಒಂದು ಇಂಚ್ ಶುಂಠಿ- ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ
ಎಣ್ಣೆ ಅಥವಾ ತುಪ್ಪ ಒಂದು ದೊಡ್ಡ ಟೇಬಲ್ ಸ್ಪೂನ್ ಬಿಸಿ ಮಾ,ಡಿ ದಾಲ್ಚಿನಿ ಎಲೆ ಎರಡನ್ನು ಹಾಕಿ, ಅಮೇಲೆ ಒಂದು ಸ್ಪೂನ್ ಜೀರಿಗೆ, ನಾಲಕೈದು ಕರಿಬೇವಿನ ಎಲೆ ಹಾಕಿ. ಇದಕ್ಕೆ ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್ ಬೆರೆಸಿ. ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ, ಅರಿಸಿನಪುಡಿ ಬೆರೆಸಿ, ಅರೆ ನಿಮಿಷ ಬಿಟ್ಟು ಬೇಯಿಸಿದ ಅನ್ನ-ತರಕಾರಿ ಮಿಶ್ರಣ ಬೆರೆಸಿ, ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ಬಡಿಸುವ ಮುಂಚೆ ಸಣ್ಣ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನ ಕಾಯಿಯ ತುರಿ ಬೆರೆಸಿ. ಲಿಂಬೆ ಹುಳಿ ಬೆರೆಸ ಬಹುದು ಅಥವಾ ಮೊಸರಿನೊಟ್ಟಿಗೆ ತಿನ್ನಬಹುದು.

No comments: